Ad imageAd image

ಸಕಲರ ಲೇಸು ಬಯಸಿದ ಶರಣರು

Kannada Bimba Team
1 Min Read
ಬಸವಕಲ್ಯಾಣದಲ್ಲಿ ನಡೆದ ಕಲ್ಯಾಣ ದರ್ಶನ ಪ್ರವಚನ ಕಾರ್ಯಕ್ರಮವನ್ನು ನಿವೃತ್ತ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ ಉದ್ಘಾಟಿಸಿದರು. ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಡಾ.ಶಿವಾನಂದ ಸ್ವಾಮೀಜಿ ಇದ್ದರು,

 

ಕನ್ನಡ ಬಿಂಬ, ಬಸವಕಲ್ಯಾಣ

ಬಸವಾದಿ ಶರಣರು ಸಕಲ ಜೀವಾತ್ಮರ ಕಲ್ಯಾಣ ಬಯಸಿದ ಮಹಾನುಭಾವರು ಎಂದು ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಬಸವಕಲ್ಯಾಣದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ವಿಶ್ವ ಬಸವಧರ್ಮ ಟ್ರಸ್ಟ್‍ನ ವತಿಯಿಂದ 46ನೆಯ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ-2025 ನಿಮಿತ್ತ ಆಯೋಜಿಸಿದ್ದ ಕಲ್ಯಾಣ ದರ್ಶನ ಪ್ರವಚನದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

12ನೇ ಶತಮಾನದ ಕಲ್ಯಾಣ ಸರ್ವ ಸಮಾನತೆಯ ಕಲ್ಯಾಣವಾಗಿತ್ತು. ದೇಶದ ಎಲ್ಲ ದಾರಿಗಳು ಕಲ್ಯಾಣದ ಕಡೆ ಬರುತ್ತಿದ್ದವು. ಬಸವಣ್ಣನವರ ಸಮಗ್ರ ಕ್ರಾಂತಿಯನ್ನು ನೋಡಲು ಜಗತ್ತಿನ ಎಲ್ಲ ಭಾಗಗಳಿಂದ ಶರಣರು ಕಲ್ಯಾಣಕ್ಕೆ ಆಗಮಿಸಿದರು. ಕಲ್ಯಾಣ ನೆಲದಲ್ಲಿ ಜಗತ್ತಿನ ಮೊದಲನೆಯ ಸಂಸತ್ತು ಎಂದು ಖ್ಯಾತಿ ಪಡೆದ ಅನುಭವಮಂಟಪ ರೂಪ ತಾಳಿತ್ತು. ಅರಿವು, ಆಚಾರ, ಅನುಭಾವ, ಕಾಯಕ, ದಾಸೋಹ ಮುಂತಾದ ಮೌಲ್ಯಗಳ ನಿಜಾಚರಣೆಯಿಂದ ಕಲ್ಯಾಣ ಕೈಲಾಸವಾಗಿ ಕಂಗೋಳಿಸಿತ್ತು. ಈ ವೈಭವ ಮತ್ತೊಮ್ಮೆ ಕಾಣುವ ಉದ್ದೇಶದಿಂದ ಕಲ್ಯಾಣ ದರ್ಶನ ಪ್ರವಚನ ಏರ್ಪಡಿಸಲಾಗಿದೆ ಬಸವ ಭಕ್ತರು ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಡಾ.ಶಿವಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಅತ್ತಿವೇರಿಯ ಬಸವೇಶ್ವರಿ ಮಾತಾಡಿ ಪ್ರವಚನ ನಡೆಸಿ ಕೊಟ್ಟರು

ಬಸವಕಲ್ಯಾಣದ ನಿವೃತ್ತ ನ್ಯಾಯಾಧೀಶ ಸುಭಾಶಚಂದ್ರ ನಾಗರಾಳೆ ಅವರು ಕಲ್ಯಾಣ ದರ್ಶನ ಪ್ರವಚನ ಉದ್ಘಾಟಿಸಿದರು. ಮಲ್ಲಿಕಾರ್ಜುನ ಚಿರಡೆ ಬಸವ ಗುರುವಿನ ಪೂಜೆ ನೆರವೇರಿ ಕೊಟ್ಟರು. ಸುಧೀರ ಕಾಡಾದಿ, ಗುರುನಾಥ ಗಡ್ಡೆ ಸೇರಿದಂತೆ ಹಲವರು ಇದ್ದರು. ಪ್ರವಚನ ಸೇವಾ ಸಮಿತಿಯ ಅಧ್ಯಕ್ಷ ಜಗನ್ನಾಥ ಪತಂಗೆ ಸ್ವಾಗತಿಸಿದರು. ಅಂಬರೀಷ್ ಭಿಮಾಣಿ ನಿರೂಪಿಸಿದರು. ಚಂದ್ರಕಾಂತ ಅಕ್ಕಣ್ಣ ವಂದಿಸಿದರು. ರಾಜಕುಮಾರ ಹೂಗಾರ ಅವರಿಂದ ವಚನ ಸಂಗೀತ ಜರುಗಿತು.

Share This Article

You cannot copy content of this page